ನಾನೇ ಅಪ್ಪ ಆಗ್ತೀನಿ

ಅಪ್ಪ ಹೊರಗಡೆ ಹೋದಾಗ
ಕೋಟು ಬೂಟು ಹಾಕ್ಕೊಂಡು
ಅಪ್ಪನ ಕಪ್ಪನೆ ಕನ್ನಡಕ
ಕಣ್ಣಿಗೆ ಸರಿಯಾಗ್ ಇಟ್ಕೊಂಡು
ನಾನೇ ಅಪ್ಪ ಆಗ್ತೀನಿ
ದಪ್ಪನೆ ದನೀಲಿ ಕೂಗ್ತೀನಿ
ಅಣ್ಣ ಅಕ್ಕ ಎಲ್ಲರಿಗೂ
ಸಖತ್ತು ರೋಪು ಹಾಕ್ತೀನಿ!

ಅಣ್ಣನ್ ಕರೆದು ಕೇಳ್ತೀನಿ:
“ಯಾಕೋ ಸ್ಕೂಲಿಗೆ ಹೋಗ್ಲಿಲ್ಲ?
ತಮ್ಮನ್ ಬಯ್ತೀಯಂತಲ್ಲೋ
ಪೆದ್ದ, ನಾಚಿಕೆ ಆಗೊಲ್ವ?
ನಿನ್ನಲ್ಲಿರೋ ಚೆಂಡನ್ನ
ಬ್ಯಾಟು ಬಳಪ ಗೋಲೀನ
ತೆಪ್ಪಗೆ ಅವ್ನಿಗೆ ಕೊಟ್ಟು ಬಿಡು
ಇಲ್ಲವೆ, ತಿನ್ತೀ ಒದೆಯನ್ನ.”

ಅಕ್ಕನ್ ಕರೆದು ಕೇಳ್ತೀನಿ:
“ಎಲ್ಲಿದ್ದಾನೇ ನಿನ್ ತಮ್ಮ?
ಅಂಥಾ ಮುದ್ದಿನ ಹುಡುಗನ್ನ
ಓದಿಸಿ ದಣಿಸೋದೇನಮ್ಮ,
ಚಿಕ್ಕವನಾದ್ರೂ ಏನ್ ಬುದ್ದಿ
ಅವನ್ಯಾಕ್ ಪಾಠ ಓದ್ಬೇಕು?
ಪಾಠ ಬೇಡ ಅವನನ್ನು
ಆಟಕ್ ಕರ್‍ಕೊಂಡು ಹೋಗ್ಬೇಕು.”

ಅಮ್ಮನ್ ಕರೆದು ಕೇಳ್ತೀನಿ:
“ತಿಂಡಿ ತುಂಬಿದ ಡಬ್ಬಾನ
ಗೂಡಿನ ಒಳಗಡೆ ಮುಚ್ಚಿಟ್ಟು
ಯಾಕೇ ಬೀಗ ಹಾಕ್ತೀಯ?
ತಿಂಡಿ ಇರೋದು ಚಿಕ್ ಮಕ್ಳು
ತಿನ್ನೋದಕ್ಕೇ ಅಲ್ವೇನೇ?
ಮಗೂಗೆ ಎಲ್ಲಾ ಕೊಟ್ಟುಬಿಡೆ
ನಾವ್ ತಿಂದಿದ್ದು ಸಾಲ್ದೇನೇ?”

ಅಜ್ಜೀನ್ ಕರೆದು ಕೇಳ್ತೀನಿ:
“ಯಾಕೇ ಮಗೂನ ಬಯ್ತೀಯ?
ಉಸ್ಮಾನ್ ಜೊತೆಗೆ ಆಡಿದರೆ
ಯಾತಕ್ ಸಿಡಿ ಸಿಡಿ ಮಾಡ್ತೀಯ?
ಬೇರೆ ಜಾತಿ ಆದ್ರೇನು
ಅವನೂ ಮನುಷ್ಯ ಅಲ್ವೇನೆ?
ಜಾತಿ ಮತದ ಭೇದ ಮಾಡೋದ್
ಯಾರೇ ಆದ್ರೂ ಸರಿಯೇನೇ?”

ಅಕ್ಕನ ಪಾಠ ತಪ್ಪತ್ತೆ
ಅಣ್ಣಂಗ್ ಲಾತ ಬೀಳತ್ತೆ!
ಅವನ ಆಟದ ಸಾಮಾನು
ಎಲ್ಲಾ ನಂಗೇ ಸಿಕ್ಕತ್ತೆ!
ಎಲ್ಲಾ ತಿಂಡಿ ಬಾಚ್ಕೊಂಡು
ಅಟ್ಟದ ಮೇಲೆ ಇಟ್ಕೊಂಡು
ಖರಮ್ ಖುರಮ್ ತಿಂತೀನಿ
ಟೀಪೂ ಬಿರ್ಜು ಕರ್‍ಕೊಂಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭೩
Next post ಕಾಳಿನ ಮೇಲೆ ಹೆಸರು

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys